ಪ್ರೊ. ರಾಜಪ್ಪ ದಳವಾಯಿ

ಸಾಹಿತ್ಯ, ಸಂಶೋಧನೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪ್ರೊ. ರಾಜಪ್ಪ ದಳವಾಯಿ, ಕನ್ನಡ ನಾಡು-ನುಡಿಯ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಭಾಷೆಯ ಮೇಲಿನ ಅತೀವ ಪ್ರೀತಿ ಮತ್ತು ಸಮಾಜದ ಬಗ್ಗೆ ಇರುವ ಕಾಳಜಿ ಅವರನ್ನು ಒಬ್ಬ ಅಧ್ಯಾಪಕನಾಗಿ, ನಾಟಕಕಾರನಾಗಿ, ವಿಮರ್ಶಕನಾಗಿ, ಸಂಶೋಧಕನಾಗಿ, ಬರಹಗಾರನನ್ನಾಗಿ ರೂಪಿಸಿದೆ.

ಶಿಕ್ಷಣ ಕ್ಷೇತ್ರದಲ್ಲಿ 3 ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಡಾ.ರಾಜಪ್ಪ ದಳವಾಯಿ, ಕೇವಲ ಬೋಧನೆಗೆ ಸೀಮಿತವಾಗದೆ ಸಾಹಿತ್ಯದ ವಿವಿಧ ಆಯಾಮಗಳಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ನಾಟಕ, ಜಾನಪದ ಸಾಹಿತ್ಯ, ವಿಮರ್ಶೆ ಹಾಗೂ ಸಾಮಾಜಿಕ ಚಳುವಳಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಈ ನಿಟ್ಟಿನಲ್ಲಿ ಹಲವು ಮಹತ್ವದ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಸಂಶೋಧನೆ (Research)

ಸಾಹಿತ್ಯ, ಸಂಸ್ಕೃತಿ, ಭಾಷೆ, ಸಿನಿಮಾ ಮತ್ತು ಹಳಗನ್ನಡ ಕನ್ನಡ ಸಾಹಿತ್ಯದ ಮೇಲೆ ಇವರು ಆಳವಾದ ಸಂಶೋಧನೆ ನಡೆಸಿದ್ದಾರೆ.
• ಪ್ರಮುಖ ಸಂಶೋಧನೆಗಳು: ‘ಕನ್ನಡದಲ್ಲಿ ಸಂಸ್ಕೃತಿ ನಿರ್ವಚನ’ (ಪಿಎಚ್.ಡಿ) ಮತ್ತು ‘ಕವಿರಾಜಮಾರ್ಗ ಬಹುಶಿಸ್ತೀಯ ಅಧ್ಯಯನ’ (ಡಿ.ಲಿಟ್).
• ವಿಷಯಗಳು: ಹಳಗನ್ನಡ ಸಾಹಿತ್ಯ, ಹಸ್ತಪ್ರತಿ ಶಾಸ್ತ್ರ, ಲಿಪಿ ಶಾಸ್ತ್ರ ಮತ್ತು ಸಾಮಾಜಿಕ ಸಂಶೋಧನೆ

ಸಂಪಾದನೆ (Editing)

ಹಲವು ಮಹತ್ವದ ಸಂಕಲನಗಳನ್ನು ಮತ್ತು ಸ್ಮರಣ ಸಂಚಿಕೆಗಳನ್ನು ಸಂಪಾದಿಸಿದ್ದಾರೆ.
• ಸಂಪಾದಿತ ಕೃತಿಗಳು: ಕನ್ನಡ ಸಾಹಿತ್ಯ ಕೋಶ – ಕನ್ನಡ ವಿಷಯ ವಿಶ್ವ ಕೋಶ, ಕನ್ನಡ ಸಾಹಿತ್ಯ ಪುನರ್ಮನನ (2005, 2006) ಮತ್ತು ನಾದದ ನದಿ (ಇಸ್ಮಾಯಿಲ್‌ ಗೋನಾಳ ಸ್ಮರಣೆ).

ಭಾಷಣಗಳು (Speeches)

ಸಮ್ಮೇಳನಾಧ್ಯಕ್ಷರಾಗಿ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಅನೇಕ ಪ್ರಭಾವಿ ಭಾಷಣಗಳನ್ನು ಮಾಡಿದ್ದಾರೆ.
• ಪ್ರಮುಖ ವಿಷಯಗಳು: ಸಾಹಿತ್ಯ, ಭಾಷೆ, ಸಂಸ್ಕೃತಿ ಮತ್ತು ಇತಿಹಾಸದ ಅಂತರ್ ಸಂಬಂಧ, ದಲಿತ ಚಳವಳಿ ಮತ್ತು ಕನ್ನಡ ಮುಸ್ಲಿಂ ಸಾಹಿತ್ಯದ ಕುರಿತ ಮಾತುಗಳು.

ಚಿತ್ರಕಲೆ (Painting)

ಇವರ ಬಹುಮುಖಿ ವ್ಯಕ್ತಿತ್ವಕ್ಕೆ ಚಿತ್ರಕಲೆ ಒಂದು ಹೊಸ ಆಯಾಮ ನೀಡಿದೆ.
• ಕೊಡುಗೆ: ಚಿತ್ರರಚನೆ ಮತ್ತು ಚಿತ್ರಕಲಾ ವಿಮರ್ಶೆಯಲ್ಲಿ ಆಸಕ್ತಿ ಹೊಂದಿದ್ದಾರೆ.
• ಕೃತಿ: ಸಿ. ಚಂದ್ರಶೇಖರ್ ಅವರ ‘ಕಲೆ-ಕಲಾಭಿವ್ಯಕ್ತಿ’ ಕುರಿತ ಕೃತಿ.

ಉಪನ್ಯಾಸಗಳು (Lectures)

ಪ್ರಾಧ್ಯಾಪಕರಾಗಿ 37 ವರ್ಷಗಳ ಕಾಲ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಜೊತೆಗೆ, ಶಾಸನ, ಕಾವ್ಯಮೀಮಾಂಸೆ, ವಿಮರ್ಶೆ, ಭಾಷೆ, ಸಂಶೋಧನೆ, ನಾಟಕ, ಸಾಂಸ್ಕೃತಿಕ ರಾಜಕಾರಣ, ಮೀಸಲಾತಿ ಇತ್ಯಾದಿ ವಿಷಯಗಳ ಕುರಿತು ರಾಜ್ಯ, ಹೊರರಾಜ್ಯಗಳಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ.
• ಅಧ್ಯಾಪನ ಕ್ಷೇತ್ರ: ಮೈಸೂರು ವಿವಿ, ಬೆಂಗಳೂರು ವಿವಿ, ಗುಲ್ಬರ್ಗಾ ವಿವಿ, ರಾಣಿ ಚೆನ್ನಮ್ಮ ವಿವಿ ಮತ್ತು ಕೋಲಾರ ವಿವಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಸಂಘಟನೆ (Organization)

ದಲಿತ – ಬಂಡಾಯ ಸಾಹಿತ್ಯ ಸಂಘಟನೆ ಸೇರಿದಂತೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
• ಚಟುವಟಿಕೆ: ಹಿಂದುಳಿದ ವರ್ಗಗಳ ಮೀಸಲಾತಿ, ರೈತರ ಸಮಸ್ಯೆಗಳು ಮತ್ತು ಕನ್ನಡ ಭಾಷಾ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ಸಂಕೀರ್ಣ (Miscellaneous)

ಇತರ ಸೃಜನಶೀಲ ಮತ್ತು ವೈಚಾರಿಕ ಕೃತಿಗಳನ್ನು ರಚಿಸಿದ್ದಾರೆ.
• ಬರಹಗಳು: ಹಕ್ಕಿಪಿಕ್ಕಿಯರ ಸಂಸ್ಕೃತಿ, ಏಳೂರ ದೇವರ ಕಾಳಗ (ಲಾವಣಿ ಸಂಗ್ರಹ), ಮತ್ತು ತೊಗಲು ಗೊಂಬೆಯಾಟದ ಕುರಿತ ಸಂಶೋಧನೆಗಳು.
• ವ್ಯಕ್ತಿ ಚಿತ್ರಣಗಳು: ಬರಗೂರು ರಾಮಚಂದ್ರಪ್ಪ, ಸಿದ್ಧಲಿಂಗಯ್ಯ, ಮತ್ತು ರಾಜಕುಮಾರ್ ಅವರ ಕುರಿತಾದ ಲೇಖನಗಳು.

ವೃತ್ತಿಜೀವನದ ಮೈ ಲಿಗಲ್ಲುಗಳು

ವರ್ಷಗಳ ಅನುಭವ
0 +
ರಂಗ ಪ್ರದರ್ಶನಗಳು
0 +
ನಡೆಸಿದ ಕಾರ್ಯಾಗಾರಗಳು
0 +
ಸಾಂಸ್ಕೃತಿಕ ಕೊಡುಗೆಗಳು
0 +

ಕಲೆ, ಸಾಹಿತ್ಯ, ರಂಗಭೂಮಿಯ ಬೆಸುಗೆ ರಾಜಪ್ಪ ದಳವಾಯಿ

ಪ್ರೊ. ರಾಜಪ್ಪ ದಳವಾಯಿ ಅವರು ಕನ್ನಡ ಸಾರಸ್ವತ ಲೋಕದ ವಿಶಿಷ್ಟ ಚಿಂತಕರು, ನಾಟಕಕಾರರು ಜನಪದ ತಜ್ಞರು ಮತ್ತು ಸಂಶೋಧಕರು. ಸಾಹಿತ್ಯಿಕ ಮತ್ತು ಸಂಘಟನಾತ್ಮಕ ಚಟುವಟಿಕೆಗಳ ಮೂಲಕ ಸಮಾಜದ ಕಟ್ಟಕಡೆಯ ದನಿಯನ್ನು ಗುರುತಿಸುವ ಅವರು, ತಮ್ಮ ಆಳವಾದ ಅಧ್ಯಯನ ಮತ್ತು ಪಾಂಡಿತ್ಯದ ಮೂಲಕ ಸಂಸ್ಕೃತಿ ಮತ್ತು ಸಾಹಿತ್ಯದ ನಡುವೆ ಸೇತುವೆಯಾಗಿದ್ದಾರೆ.